ಸೆಪ್ಟೆಂಬರ್ 9 , ಕಾವೇರಿ ಹೋರಾಟದಿಂದ ಕರ್ನಾಟಕ ಬಂದ್ ಇದ್ದ ದಿನ .
ಕರ್ನಾಟಕದಾದ್ಯಂತ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6
ಗಂಟೆಯವರೆಗೆ ಶಾಂತಿಯುತ ಪ್ರತಿಭಟನೆಗಳು ನಡೆದಿದ್ದವು. ಅಂದಿನ ದಿನ ಎಲ್ಲ ಶಾಂತವಾಗಿ
ಮುಗಿದುಹೊಗಿತ್ತು. ಶನಿವಾರ ಸಂಜೆಯ ಹೊತ್ತಿಗೆ ಸುದ್ದಿ ಮಾದ್ಯಮದಲ್ಲಿ ಒಂದು ಸುದ್ದಿ ಹಬ್ಬಿತ್ತು.
ಒಬ್ಬ ತಮಿಳುನಾಡು ಮೂಲದ ಪಿಇಎಸ್ ಕಾಲೇಜಿನ ಯುವಕ ಕನ್ನಡದ ನಟರ ವಿರುದ್ಧ ಫೇಸ್ಬುಕ್ ನಲ್ಲಿ
ಅಶ್ಲೀಲ ಅಸಹ್ಯ ಪೋಸ್ಟ್ ಹಾಕುತ್ತಿದ್ದಾನೆಂದು ಗಿರಿನಗರದಲ್ಲಿ ಅವನನ್ನು ಹಿಡಿದು ಹಿಗ್ಗಾಮುಗ್ಗ
ಥಳಿಸಿದ್ದ ವೀಡಿಯೊ ಎಲ್ಲೆಡೆ ಹರಿದಾಡತೊಡಗಿತ್ತು. ಇದನ್ನು ಕನ್ನಡ ಸುದ್ದಿ ವಾಹಿನಿಗಳು ವೀರತ್ವದ
ಪ್ರದರ್ಶನದ ಹಾಗೆ , ಕನ್ನಡಿಗರ ಹೆಮ್ಮೆಯ ಸುದ್ದಿಎಂಬ ಹಾಗೆ ಬಿತ್ತರಿಸತೊಡಗಿದವು. ಆದರೆ ಅಲ್ಲಿ
ಆಗಿದ್ದು ಯುವಕನ ಮೇಲೆ ಹಲ್ಲೆ , ಅವನು ತಪ್ಪು ಮಾಡಿದಮೇಲೆ ಪೊಲೀಸರಿಗೆ ತಿಳಿಸಬಹುದಿತ್ತು. ಆದರೆ
ಅವನ ಮೇಲೆ ನೈತಿಕ ಹಲ್ಲೆಗೆ ಇಳಿದಿದ್ದು ಕಾನೂನಿನ ಪ್ರಕಾರ ತಪ್ಪು ಎಂದು ಮಾದ್ಯಮಗಳು ತೋರಿಸಲೇ
ಇಲ್ಲ. ಆದರೂ ಒಂದನ್ನು ಗಮನಿಸಬೇಕಾದ ಸಂಗತಿಯೆಂದರೆ , ತಮಿಳುನಾಡಿನಲ್ಲಿ ಅವರ ಪ್ರಸಿದ್ದ ನಟರ
ವಿರುದ್ಧ ಅವಹೇಳನ ಮಾಡಿದ್ದರೆ ಅವರು ಸುಮ್ನೆ ಬಿಡುತ್ತಿದ್ದರೆ ?
ಕೋಪಕ್ಕೆ ಒಂದು ಗುಂಪು ತಲೆ ಬಾಗಿ ಹಲ್ಲೆ ನಡೆಸಿದ್ದನ್ನು ತಮಿಳು ಸುದ್ದಿ ಮಾಧ್ಯಮದಲ್ಲಿ
ಎಲ್ಲ ತಮಿಳಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಿದರು. ಇದರಿಂದ ರೊಚ್ಚಿಗೆದ್ದ ಅಲ್ಲಿನ
ನಾಯಕರು ಸೇಡಿನ ಮಾತನ್ನು ಹೇಳಲು ಆರಂಭಿಸಿದರು. ಇದರಿಂದ ರೊಚ್ಚಿಗೆದ್ದ ತಮಿಳುನಾಡಿನ
ಕಿಡಿಗೇಡಿಗಳು ಬಾನುವಾರ ನಡೆದಿದ್ದ ಕನ್ನಡ ಸಾಹಿತ್ಯ ಸಭೆಗೆ ನುಗ್ಗಿ ಗಲಭೆ ಎಬ್ಬಿಸಿದ್ದರು .
ಸೋಮವಾರ ಮುಂಜಾನೆಯೇ ರಾಮೇಶ್ವರದಲ್ಲಿ ಕರ್ನಾಟಕ ನೊಂದಣಿಯ ವಾಹನಗಳನ್ನು ಧ್ವಂಸ ಮಾಡಿದರು. ಕೆಲವು
ಕನ್ನಡಿಗರ ಮೇಲೆ ಹಲ್ಲೆ ನಡೆಸಿದರು . ಚೆನ್ನೈ ನ ಪ್ರತಿಷ್ಟಿತ ಹೋಟೆಲ್ ವುಡ್ಲ್ಯಾಂಡ್ಸ್ ಮೇಲೆ
ಪೆಟ್ರೋಲ್ ಬಾಂಬ್ ಎಸೆದರು . ಹೋಟೆಲ್ ಒಳಗೆ ನುಗ್ಗಿ ಆಸ್ತಿ ಹಾನಿ ಮಾಡಿದರು . ಪುದುಚೇರಿಯ
ಕರ್ನಾಟಕ ಬ್ಯಾಂಕ್ ಒಳಗೆ ನುಗ್ಗಿ ಗಲಭೆ ಎಬ್ಬಿಸಿದರು. ಇದು ಕನ್ನಡ ಸುದ್ದಿ ವಾಹಿನಿಯಲ್ಲಿ
ಬಿತ್ತರಿಸಿದರು. ಎಲ್ಲ ವಾಹಿನಿಯವರು ಎಲ್ಲ ಕನ್ನಡ ಸಂಘಟನೆಗಳಿಗೆ ಕರೆ ಮಾಡಿ “ಅಲ್ಲಿ ಹೀಗಾಗುತ್ತಿದೇ , ನಿಮ್ಮ ಮುಂದಿನ
ನಡೆ ಏನು ? ನೋಡಿ ಅಲ್ಲಿ ಕನ್ನಡಿಗರ ಸ್ತಿತಿ ಹೇಗಿದೆ . ಇಲ್ಲಿ ತಮಿಳಿಗರು ಕ್ಷೆಮವಾಗಿದ್ದರು
ಹೇಗೆ ಥಲಿಸುತ್ತಿದ್ದರೆ ನೋಡಿ” ಎಂದು ಎಲ್ಲೆಡೆ
ಬಿತ್ತರಿಸಿದರು .
ಈ ಕಿಚ್ಚು ಮಂಡ್ಯ ಮೈಸೂರು ಬೆಂಗಳೂರಿನಲ್ಲಿ ಚಿಕ್ಕದಾಗಿ ಹತ್ತಿತ್ತು. ಆಗ ಸುಪ್ರೀಂ ಕೋರ್ಟ್ ನ ಒಂದು ಅವಿವೇಕದ ತೀರ್ಪು ಹೊರಬಿತ್ತು. ಕರ್ನಾಟಕದ ವಿರುದ್ದ ಈ ತೀರ್ಪು ಬಂದಿದ್ದರಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು . ನೋಡನೋಡುತಿದ್ದಂತೆಯೇ ತಮಿಳು ನೊಂದಣಿಯ ಗಾಡಿಯನ್ನು ಮೈಸೂರು ರಸ್ತೆಯಲ್ಲಿ ಸುಟ್ಟರು . ಮೈಸೂರು ರಸ್ತೆಯ ಅದ್ಯಾರ್ ಆನಂದ್ ಭವನ್ ಮೇಲೆ ಕಲ್ಲು ತೂರಾಟ ನಡೆಸಿದರು . ಸಮಯ ಸಾಗುತ್ತಲೇ ಈ ಬೆಂಕಿ ಈಡೀ ಬೆಂಗಳೂರನ್ನು ಆವರಿಸಿತು. ಕಂಡ ತಮಿಳು ವಾಹನಗಳನ್ನು ಬೆಂಕಿಗೆ ಆಹುತಿ ಕೊಟ್ಟರು. ತಮಿಳು ಮೂಲದ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಿದರು. ಪೋಲೀಸರನ್ನು ಎಲ್ಲೆಡೆ ನಿಯೋಜಿಸಿದ್ದಾದರು ಯಾವುದು ನಿಯತ್ರಣಕ್ಕೆ ಬರಲಿಲ್ಲ. ರಸ್ತೆಯ ಮೇಲೆ ಸಾರ್ವಜನಿಕ ಓಡಾಟಕ್ಕೆ ಬ್ರೇಕ್ ಬಿದ್ದಿತ್ತು. ಸಂಜೆಯ ಹೊತ್ತಿಗೆ ನಾಯಂಡಹಳ್ಳಿಯಾ ಕೆ.ಪಿ.ಏನ್ ಟ್ರಾವೆಲ್ಸ್ ನ ಸುಮಾರು 50 ಬಸ್ ಅನ್ನು ಸುಟ್ಟರು. ಅಲ್ಲಿಗೆ ಬೆಂಗಳೂರು ರಣರಂಗವಾಗಿತ್ತು. ಎಲ್ಲೆಡೆ ಲಾಟಿ ಪ್ರಹಾರ, ಕೆಲವೆಡೆ ಗೋಲಿ ಬಾರ್ ಶುರುವಾಗಿತ್ತು . ರಾತ್ರಿಯ ಹೊತ್ತಿಗೆ 16 ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕುರ್ಫ್ಯು ಜಾರಿಯಾಯಿತು. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಯಾವ ಸಾಮಾನ್ಯ ಕನ್ನಡಿಗನು ಅಲ್ಲ . ಎಲ್ಲ ಬಡಾವಣೆಯಲ್ಲೂ ಗೂಂಡಾಗಳು ಬೀದಿಗೆ ಇಳಿದಿದ್ದರು. ಎಲ್ಲರನ್ನು ಪ್ರಚೋದಿಸಿ ಗಲಭೆ ಶುರುಮಾಡಿದ್ದರು. ಪೋಲೀಸರ ಕೆಲವು ದಿಟ್ಟ ನಿರ್ಧಾರದ ಮೇಲೆ ಇಂದು ಎಲ್ಲವು ಶಾಂತವಾಗಿದೆ . ಬೆಂಗಳೂರು ಮತ್ತೆ ಸಹಜ ಸ್ಥಿತಿಗೆ ಮರುಕಳಿಸಿದೆ.
ಇಲ್ಲಿ ರಾಜಕೀಯಕ್ಕೆ ಬಡವರ ವಾಹನಗಳು ಬೆಂದು ಹೋದವು , ಸಾಮಾನ್ಯ ಜನರ ಜೀವನಕ್ಕೆ ಅಡ್ಡಿ ಉಂಟಾಗಿತ್ತು. ಗೂಂಡ ಮತ್ತು ಭೂಗತ ಜಗತ್ತಿನ ಕಿಡಿಗೇಡಿಗಳು ಉಧ್ಯಾನ ನಗರಿಯನ್ನು ಬೆಂಕಿ ಚೆನ್ದಂತೆ ಮಾಡಿದ್ದರು. ಇಷ್ಟೆಲ್ಲಾ ಮುಗಿದಮೇಲೂ ಕೆಲವು ಉತ್ತರವಿಲ್ಲದ ಅನುಮಾನದ ಪ್ರಶ್ನೆಗಳು ಮೂಡುತ್ತವೆ.
• ಕ್ಯಾಮೆರಾ ಕಣ್ಣಲ್ಲಿ ಕಂಡಂತೆಯೇ ಲಾರಿ,ಬಸ್ ಗಳನ್ನೂ ಬೆಂಕಿಗೆ ಒಂದೆರಡು ನಿಮಿಷದಲ್ಲಿ ಹಚ್ಚುತ್ತಿದ್ದರು. ಇಷ್ಟೊಂದು ಬೆಂಕಿ ಹಚ್ಚುವ ಕೌಶಲ್ಯ ಸಾಮಾನ್ಯ ಜನರಿಗಿರುತ್ತ ?? ಸಾಮಾನ್ಯ ಹೋರಾಟಗಾರರಿಗೆ ಇರುತ್ತಾ ?? ರೈತರಿಗೆ ಇದು ಸಾಧ್ಯವೆ ?? (ಅಲ್ಲಿಗೆ ಗಲಭೆ ಎಬ್ಬಿಸಿದ್ದವರಲ್ಲಿ ಗೂಂಡ ಮತ್ತು ಭೂಗತ ಜಗತ್ತಿನ ಕೈವಾಡ ವಿದೆ ಎಂಬಂತೆ ಪುಷ್ಟಿ ಕೊಡುತ್ತದೆ )
• ಅಷ್ಟು ಉರಿದಿದ್ದರು ಒಂದೇ ಒಂದು ತಮಿಳುನಾಡಿನ ಸರಕಾರೀ ಬಸ್ಸಿಗೆ ಹಾನಿಯಾಗಿಲ್ಲ. ಏಕೆಂದರೆ ಅವು ಇಲ್ಲಿಂದ ಹಿಂದಿನ ದಿನದ ರಾತ್ರಿಯೇ ಕಾಲ್ಕಿತ್ತಿತ್ತು. ಹಾಗಿದ್ದರೆ ತಮಿಳುನಾಡಿನ ಸರಕಾರಕ್ಕೆ ಹೀಗಾಗುತ್ತೆ ಎಂದು ಮೊದಲೇ ಗೊತ್ತಿತ್ತೆ? ಗೊತ್ತಿದ್ದರು ಮೌನ ವಹಿಸಿತ್ತೆ ? ಇದರಲ್ಲಿ ಅವರ ಕೈವಾಡವು ಇದೆಯಾ ??
• ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಪ್ರತಿ ಭಾರಿ ದೊಡ್ಡ ಗಲಭೆಗಳಲ್ಲಿ ಕೆ.ಪಿ.ಏನ್ ಟ್ರಾವೆಲ್ಸ್ ನ ಬಸ್ಸುಗಳು ಒಟ್ಟಿಗೆ ಬೆಂಕಿಗೆ ಆಹುತಿಯಾಗುತ್ತವೆ . ಇದು ಮಾಲೀಕನ ಹುನ್ನಾರ ಆಗಿದೆಯಾ ? ಇನ್ಸೂರೆನ್ಸ್ ಹಣಕ್ಕೆ ಇಂತಹದನ್ನು ಸೃಷ್ಟಿ ಮಾಡುತ್ತಿದ್ದಾರೆಯೇ ?
ಇವೆಲ್ಲವೂ ವಿಚಾರಣೆ ಬಳಿಕವಷ್ಟೇ ಗೊತ್ತಾಗಬೇಕಿದೆ. ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ ನಿಜ. ಅದಕ್ಕೆ ಶಾಂತಿಯನ್ನು ನಾವುಗಳು ಮೀರಬಾರದು. ಈ ಗಲಭೆಯಲ್ಲಿ ಹಾನಿಯಾಗಿದ್ದೆಲ್ಲ ಸಾರ್ವಜನಿಕ ಆಸ್ತಿ, ಬಡವರ ಕಷ್ಟ ಪಟ್ಟು ದುಡಿದ ವಾಹನಗಳು. ಎಲ್ಲರು ಶಾಂತಿ ಕಾಪಡುವುದು ನಮ್ಮ ಕರ್ತವ್ಯ . ಕಾನೂನಿನ ರೀತಿಯಲ್ಲಿ ಏನು ಆಗಬೇಕೋ ಅವೆಲ್ಲವೂ ಸರಕಾರ ತೊಗೊಳಲಿ ಎಂದು ಅಗ್ರಹಿಸೋಣ. ಶಾಂತಿಇಂದ ನೆಲೆಸೋಣ .
.